ರಾಯಚೂರು

ಜಾನಪದ ಪರಿಷತ್ತು ಮಹಿಳಾ ಅಧ್ಯಕ್ಷರಾಗಿ ಲಕ್ಷ್ಮೀದೇವಿ

ಲಿಂಗಸುಗೂರು: ಕರ್ನಾಟಕಜಾನಪದ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಲಕ್ಷ್ಮೀದೇವಿ ನಡುವಿನಮನಿಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶರಣಪ್ಪ ಆನೆಹೊಸೂರು ತಿಳಿಸಿದರು.

ಶಿವಮ್ಮ ಪಟ್ಟದಕಲ್ಲ(ಗೌರವಾಧ್ಯಕ್ಷೆ), ಲಕ್ಷ್ಮೀದೇವಿ ನಡುವಿನಮನಿ(ಅಧ್ಯಕ್ಷೆ), ವಿಜಯಲಕ್ಷ್ಮೀ ಮೂಲಿಮನಿ, ಶಶಿಕಲಾ ಭೋವಿ ಮುದಗಲ್, ಸುಲೋಚನಾ ಕೊಳ್ಳಿ(ಉಪಾಧ್ಯಕ್ಷೆ), ಕಮಲಾಕ್ಷಿ ಎಸ್. ಸೊಪ್ಪಿಮಠ(ಪ್ರದಾನ ಕಾರ್ಯದರ್ಶಿ), ಮಲ್ಲಮ್ಮ ಹೊಸಮನಿ, ದೊಡ್ಡ ಹಚ್ಚಮ್ಮ, ಆಚಾರ್ಯ ಸಂಗೀತಾ ಹಟ್ಟಿಚಿನ್ನದ ಗಣಿ(ಸಹ ಕಾರ್ಯದರ್ಶಿ), ಸಿದ್ದಮ್ಮ ಯಂಕಪ್ಪ ಪಾಟೀಲ( ಕೋಶಾಧ್ಯಕ್ಷೆ), ಸುನಂದಾ ಮೋದಿ ಮುದಗಲ್, ಸಾವಿತ್ರಿ ಜಹಗೀರದಾರ್, ವಿಜಯಲಕ್ಷ್ಮೀ ನಂದಿಕೋಲಮಠ, ಬಸಮ್ಮ ದೇವದುರ್ಗ(ಸಂಘಟನಾ.ಕಾರ್ಯದರ್ಶಿ), ಸರೋಜಾ ಪಾಟೀಲ, ನಿರ್ಮಾಲ ಪಾಟೀಲ, ಸುಭದ್ರಾ ತಂಬಾಕೆ, ನಿರ್ಮಾಲ ಬಳಗಾನೂರು(ಗೌರವ ಸಲಹೆಗಾರರು), ಸುವರ್ಣ ರುದ್ರಗಂಟಿ, ಶೋಭಾ ಬಿರದಾರ, ವಿಜಯಲಕ್ಷ್ಮೀ ವಾಲ್ಮೀಕಿ, ಶ್ವೇತಾ, ವೀಣಾ ಅಮರೇಶ, ಶರಣಮ್ಮ ವ್ಯಾಕರನಾಳ, ಶಾಂತಾ ದೇವದುರ್ಗ, ಗೀತಾದೇವಿ ಹಲೆಗಾವಿ, ಗಂಗಾ ಮೇಟಿ, ಪೂಜಾ ಮಟ್ಟೂರು, ನಾಗರತ್ನ( ಸದಸ್ಯರು) ಅವರುಗಳನ್ನು ನೇಮಕ ಮಾಡಲಾಗಿದೆ.  

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅವರ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ಯನ್ನು ಮುನ್ನೆಲೆಗೆ ತರುವ ಜವಾಬ್ದಾರಿ ಮಹಿಳಾ ಘಟಕದ ಮೇಲೂ ಇರುವುದರಿಂದ, ನೂತನ ಸಮಿತಿಯು ಈ ಕಾರ್ಯವನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಡಾ. ಶರಣಪ್ಪ ಆನೆಹೊಸೂರು ಕರೆ ನೀಡಿದ್ದಾರೆ.
 

Leave a Reply

Your email address will not be published. Required fields are marked *

error: Content is protected !!